ವೈಕು ಅಲಿಯಾಸ್ ವೈಕುಂಟರಾವ್ ಸ್ಕೂಲ್ನಲ್ಲಿ ಪಾಠಹೇಳೋ ಮೇಷ್ಟ್ರಾಗಿ, ತನ್ನ ಪ್ರಾಣ ಸ್ನೇಹಿತ ವಿಶ್ವನಾಥನನ್ನ ಆಗುಂಬೆ ಘಾಟಿಯ ಪ್ರಪಾತಕ್ಕೆ ತಳ್ಳಿ ಸಾಯ್ಸಿದ್ದಾನೆ. ವೈಕುಗೆ ಇರೋ ಇತಿಹಾಸದ ಹುಚ್ಚನ್ನ ಹೆಚ್ಚು ಮಾಡೋಕೇ, ತಾಳಿಕೋಟೆಯಲ್ಲಿಕದನದಲ್ಲಿ ಹೋರಾಡಿದ ಸೈನಿಕರಿಬ್ಬರು (ಮಲ್ಲಣ್ಣ, ತ್ರಿವಿಕ್ರಮ) ಮಾಯಾತಂತ್ರದಿಂದ ಇರುವೆಗಳಾಗಿದ್ದೋರು ಮತ್ತೆ ಮನುಷ್ಯರೂಪ ತಳೆದು ಬಂದಿದ್ದಾರೆ.
ವೈಕು ಹೆಂಡತಿ ದೇವಿಕಾಗೂ, ವಿಶ್ವನಾಥನಿಗೂ, ತಾಳಿಕೋಟೆಯ ಕದನಕ್ಕೂ, ಮಲ್ಲಣ್ಣ - ತ್ರಿವಿಕ್ರಮರಿಗೂ, ಪಾಕಿಸ್ತಾನದ ಭಯೋತ್ಪಾದಕರಿಗೂ ಒಂದಕ್ಕೊಂದು ಅದೇನೋ ಸಂಬಂಧವಿದ್ದಹಾಗಿದೆ!?
ಇದೊಂದು ಸಸ್ಪೆನ್ಸ್ ಸೈಕಲಾಜಿಕಲ್ ಥ್ರಿಲ್ಲರ್ ಕಾದಂಬರಿ!
ಮಂಗಳೂರಿನಲ್ಲಿ ಹುಟ್ಟಿ, ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿದ ವಿಠಲ್ ಶೆಣೈಯವರು, ಬೆಂಗಳೂರಿನ ಹಲವು ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಬರವಣಿಗೆಯ ಹುಚ್ಚು ಕಳೆದ ಏಳು-ಎಂಟು ವರ್ಷಗಳಿಂದ ಪ್ರಾರಂಭವಾಗಿ ಈಗ ಪುಸ್ತಕ ಪ್ರಕಾಶನದತ್ತ ತಮ್ಮ ಸಾಹಿತ್ಯ ಪ್ರಯಾಣವನ್ನು ಮುಂದುವರೆಸಿದ್ದಾರೆ. ಅಮೇರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಬಲ್ಗೇರಿಯ, ಸಿಂಗಾಪುರ್-ಗಳಂತಹ ದೇಶಗಳನ್ನು ಕೆಲಸದ ನಿಮಿತ್ತ ವಿಹರಿಸಿ, ವಿವಿಧ ಜನರೊಡನೆ ಬೆರೆತು, ಅಲ್ಲಿಯ ಕೆಲವು ಸೂಕ್ಷ್ಮತೆಗಳನ್ನು ಗಮನಿಸಿ ಅವುಗಳನ್ನು ಕಥೆ, ಪ್ರಬಂಧ ಮತ್ತು ಕಾದಂಬರಿಗಳಲ್ಲಿ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಯಂಡಮೂರಿ ವೀರೇಂದ್ರನಾಥ್, ಪೂರ್ಣಚಂದ್ರ ತೇಜಸ್ವಿ, ಕೆ.ಎನ್.ಗಣೇಶಯ್ಯ ನವರಂತಹ ಮಹಾನ್ ಲೇಖಕರ ಬರಹಗಳನ್ನು ಓದಿ ಪ್ರೇರೇಪಿತರಾಗಿದ್ದಾರೆ. ಸಾಫ್ಟ್ವೇರ್ ಕೋಡ್ ಮತ್ತು ಕಥೆಗಳನ್ನು ನಿಯತವಾಗಿ ಬರೆಯುತ್ತಾರೆ.
Rent Now